Monday, 11 November 2013

Use Quillpad to type in Indian languages on Facebook, Twitter, Blogs, Email etc..

Use Quillpad to type in Indian languages onದಾರಿಯುದ್ದಕ್ಕೂ...ನಿನ್ನ ನೆರಳಿತ್ತು
ನೀ ವರ್ಷಕ್ಕೆ ಮೂಲವಾಗಿದ್ದೆ
ಸುಡುಬಿಸಿಲಿಗೆ ನಿನ್ನ ನೆರಳು ಸವಾಲು ಎಸೆಯುತ್ತಿತ್ತು.
ತಂಗಾಳಿಗೆ ಜೊತೆಯಾಗಿದ್ದೆ.
ಚಿಲಿಪಿಲಿಗಳ ಕಲರವ ನಿನ್ನ ಮಡಿಲ ತುಂಬಿತ್ತು.
ತನ್ನ ದುರಾಸೆಗೆ ನಿನ್ನ ಬಲಿಕೊಟ್ಟ ಮನುಜ
ಅನುಭವಿಸುತ್ತಿರುವ....ಇಂದು
ಅತಿವೃಷ್ಟಿಗಳ ಅಬ್ಬರವ,
ಸುನಾಮಿ,ಹಯಾನ್ಗಳ  ಅಪ್ಪಳಿಕೆಗಳ...!
ನೀ ಕಯ್ಯಾರೆ ಸೃಷ್ಟಿಸಿದ ಸೃಷ್ಟಿಗೆ
ನೀ ಬುದ್ದಿ ಹೇಳುತ್ತಿರುವ ಪರಿಯಿದಾ..?
ಮೂಡ,ಅಂಧ,ಮನುಜ ಕಲಿಯಲಾರ
ಅವನ ಕಪಿಚೇಷ್ಟೆಗೆ, ನಿನ್ನ ಶಿಕ್ಷೆಗೆ
ಬಲಿಯಾಗುವರು ಅಮಾಯಕರು..!
ಕೊನೆಗೆ ನಾನಾ,ನೀನಾ ಅನ್ನೋ ಮಟ್ಟಕ್ಕೆ ನಿಮ್ಮ ಇರಿಸು ಮುರಿಸು.
ಸೃಷ್ಟಿಸಿದ ತಾಯಿ ನೀನು..ಸಾಲುಮರದ ತಿಮ್ಮಕ್ಕನಂತಹರನ್ನೂ..!
ಅಂತಹ ಮಹಾತಾಯಿಯರು ಕಾಪಾಡುತಿಹರು
ಈ ಲೋಕವನ್ನ...
ಅಂಗಳದಲ್ಲಿ ಆಡುವ ಕಂದನಿಗಿಲ್ಲ
ಸವಿ ನಾಳೆಗಳು....!
-ಬಳ್ಳಾ
 Facebook, Twitter, Blogs, Email etc..

Monday, 1 July 2013

ಬರುವೆನಂದರೂ ಬರಲಿ ಬಿಡು..!

ಬರುವೆನಂದರೂ ಬರಲಿ ಬಿಡು..!



ಚಂದ್ರನ ಜೊತೆಗೆ,ತಾರೆಯ ಬೆಳಕು ಕೂಡ ಬರುವೆನಂದರೂ ಬರಲಿ ಬಿಡು..!ಮಂಜಿನ ಜೊತೆಗೆ,ತಂಗಾಳಿಯ ಸವಿ ಕೂಡಬರುವೆನಂದರೂ ಬರಲಿ ಬಿಡು..!ನಿನ್ನ ಪ್ರೀತಿಯ ಜೊತೆಗೆ,ನಿನ್ನೊಲವು ಕೂಡಬರುವೆನಂದರೂ ಬರಲಿ ಬಿಡು..!ಬಾಡದ ಹೂ ಬಾಡಿತು ಹೇಗೋ?ನನ್ನಿಂದ ನೀ ಜಾರಿ ಹೋದೆ ಹೇಗೆ ತಿಳಿಯೆ...!

-ಬಳ್ಳಾ


Monday, 11 March 2013

ನೀ ಒಳಗಿರಲು
ಬೀಸಿದೆ ಹೃದಯ ಮೈದಾನದಲಿ ತಂಗಾಳಿ,
ಮನಸಾ ಬೀದಿಲಿ ಹರಿದಿದೆ,ಹರುಷದ ಹೊನಲು.
ಕನಸಾ ಕೋಟೆಯಾ ತುಂಬಾ ಕನಸಿನ ಝುಳು ಝುಳು
-ಬಳ್ಳಾ

Sunday, 10 March 2013

ನನ್ನ ನಿನ್ನ ಜೀವನ ಪುಟದಲ್ಲಿ ಲೆಕ್ಕಾನೇ ಇಲ್ಲದಷ್ಟು ನೆನಪು ಇದೆ.
ಜೀವನದ ಪ್ರತಿ ತಿರುವಲ್ಲೂ,ನಿನ್ನ ನೆನಪೇ ಕೇಕೆ ಹಾಕಿ ನಗ್ತಾ ಇದೆ.
ನೋವಿನ ಪ್ರತಿ ಹೆಜ್ಜೆಲೂ, ನೀಡಿದ್ದ ಸಾಂತ್ವನ ತಲೇಲಿ ಗಿರ್ಕಿ ಹೊಡೀತಿದೆ.
ತಂಗಾಳಿ ಬೀಸಿದಾಗೆಲ್ಲ...ನೀ ಸೋಕಿದ್ದ ನೆನಪಾಗಿ,ಮನ ಮುದುಡಿ ಹೋಗಿದೆ.
ಹಗಲು ಎನ್ನದೆ,ಇರುಳು ಎನ್ನದೆ..ಬರೀ ನಿನ್ನ ನೆನಪು ಬರಿಸಿ,ಗಡಿಯಾರ ನಾಚಿಸಿದೆ.

Sunday, 30 September 2012

ಕರಗಿ ಹೋಗುವ ಮುನ್ನ, ಕಲೆತುಬಿಡು.
ಮುದುಡಿ ಹೋಗುವ ಮುನ್ನ,ಮೆರೆದುಬಿಡು.
ಮುಳುಗಿ ಹೋಗುವ ಮುನ್ನ,ನೆನೆದುಬಿಡು.
ಕಣ್ಣೇರು ಬತ್ತಿ ಹೋಗುವ ಮುನ್ನ,ಅತ್ತುಬಿಡು.
ಆಸಕ್ತಿ ಹೋಗುವ ಮುನ್ನ,ನನ್ನ ಬಿಟ್ಟುಬಿಡು.
ನನ್ನಿಂದ ನೀ ಹಾರಿ ಹೋಗುವ ಮುನ್ನ,ನಿನ್ನ ನೆನಪ ಆರಿಸಿಬಿಡು.
-ಬಳ್ಳಾರಿ ರಾಘವೇಂದ್ರ.

Wednesday, 4 July 2012

ಬಣ್ಣದ ಕನಸು

ಬಣ್ಣದ ಕನಸುಗಳಲ್ಲಿ ನಿನ್ನನು ಹುಡುಕುತಾ
ಕುಣಿದಿದೆ ಮನಸು ತಕದಿಮಿತಾ...
ಸಾರುತ ಹೊರಟಿದೆ ನಮ್ಮ ಪ್ರೇಮದ ತುಡಿತ
ಕಣ್ಣ ಕಟ್ಟಿ ಕಲಿಸುತಿದೆ....ಪ್ರೇಮದ ಕಾಗುಣಿತ
ಈ ಪ್ರೀತಿ ಶಾಶ್ವತ.?????
-ಬಳ್ಳಾರಿ ರಾಘವೇಂದ್ರ

Thursday, 15 March 2012

ಆದ್ರೆ..... ನೀ ಜೊತೆಗಿಲ್ಲ ಇಂದು..!

ನಿನ್ನ ಮನಸ ಮೂಲೆಯಲ್ಲಿ ಇನ್ನೂ ನಾನು ಇರಬಹುದಾ.?
ಕಣ್ಣ ಒಳನೋಟದಲ್ಲೂ ಸಹ ಇನ್ನೂ ನಾನು ಇರಬಹುದಾ..?
ಆಗಾಗ ಬೀಳೊ ಕನಸಲ್ಲೂ ನಾನು ಇರಬಹುದಾ.?.
ಓರೆ ನೋಟ ಬೀರೋ ಕಣ್ಣಿಗೂ ಸಹ ನಾ,ಕಾಣಿಸಬಹುದಾ.?
ನಿನ್ನ ಅಂತರಾಳದ ಒಳಗೆ ಎಲ್ಲೋ ಒಂದು ಕಡೆ ನಾ ಇರಬಹುದಾ?
ಹೋಗ್ಲಿ...ಕೊನೆಗೆ, ನಿನ್ನ ಗುಂಡಿಗೆಯ ಮಿಡಿತಕ್ಕಾದರೂ..ನನ್ನ ನೆನಪು ಇರಬಹುದಾ.?
ಇವೆಲ್ಲಾ ಪ್ರಶ್ನೆಗಳಿಗೆ ನಿನ್ನುತ್ತರ ಇಲ್ಲ ಅನ್ನುವುದಾದರೆ.???ಹುಸಿ ನುಡಿಯಬೇಡ,ಗೆಳತಿ...!
ನಾವು ಒಟ್ಟಾಗಿ ಸುತ್ತಾಡಿ,ಪ್ರೀತಿಸಿದ್ದಕ್ಕೆ,ನಿಮ್ಮನೆ ಬೀದಿ ನಾಯಿ,ಮೇಲ್ಮನೆ ಪಾರ್ಕಿನ ಬೆಂಚು,
ಅಲ್ಲಿನ ಗಿಡ,ಮರ,ಅವುಗಳ ನೆರಳು.ಸುಯ್ಯನೆ ಬೀಸುತ್ತಿದ್ದ ತಂಗಾಳಿ,ಭೋರ್ಗರೆದು ಸುರಿಯುತ್ತಿದ್ದ ಮಳೆ,
ಪಾನಿ ಪೂರಿ ಹುಡ್ಗ.ಐಸ್ ಕ್ರೀಮ್ ಪಾರ್ಲರ್,ಇವರೆಲ್ಲರೂ ಸಾಕ್ಷಿ ಇದ್ದಾರೆ...!!!!
ಇವತ್ತು ಅವ್ರೆಲ್ಲರೂ ಇದ್ದಾರೆ...ಸುರಿಯುವ ಮಳೆಯೂ..ಬಂದಿದೆ..ಆದ್ರೆ ನೀ ಜೊತೆಗಿಲ್ಲ ಇಂದು..!!!
ನಿರೀಕ್ಷೆಯಲ್ಲಿ
ನಿನ್ನವನೆಂದಿಗೂ.!!!!